ಧರಣೇಂದ್ರ ಕುರ್ಕುರಿ (ಜನನ 1 ಏಪ್ರಿಲ್ 1942) ಕನ್ನಡ ಕವಿ, ಅನುವಾದಕ ಮತ್ತು ಅಂಕಣಕಾರ. ಕುರ್ಕುರಿಯು ಎಂಟು ಕವನ ಸಂಕಲನಗಳನ್ನು, ಅವರ ಅಂಕಣಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ ಮತ್ತು 22 ಪುಸ್ತಕಗಳನ್ನು ಅನುವಾದಿಸಿದ್ದಾರೆ. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಹಿಂದಿಯ ನಿವೃತ್ತ ಪ್ರಾಧ್ಯಾಪಕರು ಮತ್ತು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದಾರೆ. == ವೃತ್ತಿ ಅನುಭವ == ಭಾರತೀಯ ಕುಟುಂಬ ಯೋಜನಾ ಸಂಸ್ಥೆಯಲ್ಲಿ ಐದು ವರ್ಷ ಹಿರಿಯ ಶಿ್ಪ್ಷಣಾಧಿಕಾರಿಯಾಗಿ ಆಡಳಿತದ ಅನುಭವ. ೨೫ ವರ್ಷ ಅಧ್ಯಾಪಕ ವೃತ್ತಿ (ನಾಲ್ಕು ವರ್ಷ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹುದ್ದೆ ಸೇರಿ) ಪ್ರೊಫೆಸರ್ ಮತ್ತು ಮುಖ್ಯಸ್ಥರು, ಹಿಂದಿ ವಿಭಾಗ, ಎಂ.ಎA.ಕಲಾ ಮತ್ತು ವಿಜ್ಞಾನ ಕಾಲೇಜು ಸಿರ್ಸಿ. ದಂದು ಸಿರ್ಸಿಯ ಎಂ.ಎA.ಕಲಾ ಮತ್ತು ವಿಜ್ಞಾನ ಕಾಲೇಜಿನಿಂದ ಸೇವಾ-ನಿವೃತ್ತಿ (2000) == ಪ್ರಕಟನೆಗಳು == === ಕಾವ್ಯ === ಹರಕು (1972) ನೀರಾಗ ಕುಂತೇನ ನೆನಕೊಂತ (1978) ಹೊಸಾ ಕಾಲ ಬರತಾವ (1982) ನಾ ಕವಿ ಅಲ್ಲ (1993) ಆಯ್ದ ಕವನಗಳು (1997) ಶಬ್ದವಾಯಿತು ನಕ್ಷತ್ರ (2005) ಕುಂಚ ಮತ್ತು ಬಣ್ಣ (2011) === ಅಂಕಣ ಬರಹ === ಮಸಾಲೆ ಚುರುಮರಿ (2011) === ಅನುವಾದ === ನಾವು ಮೆಚ್ಚಿದ ಹಿಂದಿ ಕತೆಗಳು (1983) ಪ್ರಿಯ ಶಬನಂ (1993) ನಿರಾಲಾ (2010) ಜೈನ ಧರ್ಮ ಏನು ಹೇಳುತ್ತದೆ? (2017) ಮೋಹನ ದಾಸ (2019) ಜಾನಕಿದಾಸ ತೇಜಪಾಲ ಮ್ಯಾನ್ಶನ್ ಒಂದು ಮುರುಕು ಖುರ್ಚಿ (2011) ಪರ್ಯಟನ (1992) ಅಂತ (1993) ಕಠಪುತಲಿ ಕಾ ವಿದ್ರೋಹ (1993) ಆಜ ಕಿ ಕನ್ನಡ ಕವಿತಾಯೆಂ (1995) ಚಾವುಂಡರಾಯ ವೈಭವ (2001) ಅಂಗಾರಕಿ ಚೋಟಿ ಪರ (2001) ಪತ್ಥರ ಪಿಘಲನೆ ಕಿ ಘಡಿ (2004) ಓಂ ಣಮೊ (2009) ಜುರ್ಮಾನಾ (2008) ದೃಷ್ಟಿ (2015) ಸೀತಾಯನ (2015) ಶೇರ ಬಾಜಾರ ಮೆಂ ಗಂಗಾ (2015) ಉದ್ಧಾರ ಏವಂ ಬಾಜಾರ (2015) ಅಮೀನಪುರ ಕಾ ಬಾಜಾರ (2018) ಜಡೆಂ ಜ್ವಾಲಾಮುಖಿ ಪರ್ (2019) == ಧರಣೇಂದ್ರ ಕುರಕುರಿ ಕುರಿತು ಸಾಹಿತ್ಯ == ಧರಣೇಂದ್ರ ಕುರಕುರಿ ಸಂ ಸ್ವರ್ಣಸೇತು ಅನೇಕ ಬಿಡಿ ಲೇಖನಗಳು ಬೇರೆ ಬೇರೆ ಗ್ರಂಥಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟ == ಸಾಹಿತ್ಯಿಕ ಸಾಧನೆ == ಕನ್ನಡದ ವಿಶಿಷ್ಠ ಕವಿ, ರೈತರ, ಶೋಷಿತ ವರ್ಗದ ಪರವಾದ ಗಟ್ಟಿ ಧ್ವನಿ ಹಲವಾರು ರಾಷ್ಟç ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ಮತ್ತು ಪ್ರಬಂಧಗಳ ಮಂಡನೆ ಹಾಗೂ ಗೋಷ್ಠಿಗಳ ಅಧ್ಯಕ್ಷತೆ ಅನೇಕ ಹಿಂದಿ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಹಿಂದಿ ಮತ್ತು ಕನ್ನಡ ಸಾಹಿತ್ಯಗಳ ಕುರಿತು ಪ್ರಬಂಧಗಳ ಮಂಡನೆ ಹಾಗೂ ಅಧ್ಯಕ್ಷತೆ ಹಲವಾರು ಕವಿತೆಗಳು ತೆಲಗು, ತಮಿಳು ಹಾಗೂ ಹಿಂದಿ ಭಾಷೆಗೆ ಅನುವಾದ ಹಲವಾರು ಹಿಂದಿ ಹಾಗೂ ಕನ್ನಡ ಪ್ರಾತಿನಿಧಿಕ ಸಂಕಲಗಳಲ್ಲಿ ಕವಿತೆ ಹಾಗೂ ಪ್ರಬಂಧಗಳು ಪ್ರಕಟ ಕಾವ್ಯದಲ್ಲಿ ಶೋಷಿತರ ಹಾಗೂ ದುರ್ಬಲ ವರ್ಗದ ಪರ ಧ್ವನಿ ಒಂದು ಹಿಂದೀ ಪುಸ್ತಕಕ್ಕೆ ರಾಷ್ಟಿçÃಯ ಪ್ರಶಸ್ತಿ. ಅಂದಿನ ರಾಷ್ಟçಪತಿಗಳಿಂದ ದಿ. ೧೫-೩-೧೯೯೬ ರಂದು ಪ್ರಶಸ್ತಿ ಸ್ವೀಕಾರ ‘ಆಯ್ದ ಕವನಗಳು’ ಎಂಬ ಕವನ-ಸಂಗ್ರಹ ೧೯೯೭ ರಿಂದ ನಾಲ್ಕು ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎಸ್ಸಿ.ಭಾಗ ೨ಕ್ಕೆ ಪಠ್ಯ ಪುಸ್ತಕವಾಗಿತ್ತು ಹಲವಾರು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಂಘಟನೆ ಅನೇಕ ಕನ್ನಡ ಕೃತಿಗಳನ್ನು ಹಿಂದಿಗೆ ಅನುವಾದಿಸಿ ಶ್ರೇಷ್ಠ ಅನುವಾದಕರೆಂದು ಹೆಸರು. ಜೊತೆಗೆ ಹಿಂದಿ ಕೃತಿಗಳ ಕನ್ನಡ ಅನುವಾದ ಬಾಲಕೃಷ್ಣ ಸಾಹಿತ್ಯ ಪುರಸ್ಕಾರ ಕದಂಬ ಸೇವಾ ರತ್ನ ಪ್ರಶಸ್ತಿ ಪುರಸ್ಕಾರ ಸಿರ್ಸಿ ಶೈಕ್ಷಣಿಕ ಜಿಲ್ಲಾ ಸಾಹಿತ್ಯ ಸಮ್ಮೇಳನ ೨೦೧೪ ರ ಸರ್ವಾಧ್ಯಕ್ಷತೆಯ ಗೌರವ ದಕ್ಷಿಣ ಭಾರತ ಜೈನ ಮಹಾಸಭೆಯ ಸಾಹಿತ್ಯ ಪ್ರಶಸ್ತಿ (ಕನ್ನಡ)-೨೦೧೫ ಕ್ಕೆ ಪಾತ್ರ ಸಮ್ಮಾನನೀಯ ಪ್ರಧಾನ ಮಂತ್ರಿಗಳ ‘ಮನ ಕಿ ಬಾತ’ ಭಾಷಣದ ಅನುವಾದ ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಲನ (2015) == ಪ್ರಶಸ್ತಿಗಳು == ಆಜ ಕಿ ಕನ್ನಡ ಕವಿತಾಯೆಂ’ ಎಂಬ ಅನುವಾದಿತ ಪುಸ್ತಕಕ್ಕೆ ಕೇಂದ್ರೀಯ ಹಿಂದಿ ನಿರ್ದೇಶನಾಲಯದ ರಾಷ್ಟಿçÃಯ ಪ್ರಶಸ್ತಿ (1996) ಬಾಲಕೃಷ್ಣ ಸಾಹಿತ್ಯ ಪ್ರಶಸ್ತಿ ಸಾಮಾಜಿಕ ಸೇವೆಗೆ ‘ಕದಂಬ ಸೇವಾ ರತ್ನ ಪ್ರಶಸ್ತಿ ‘ಕಲಿ-ಕತೆ : ವ್ಹಾಯಾ ಬೈಪಾಸ್’ ಎಂಬ ಅನುವಾದಿತ ಕಾದಂಬರಿಗೆ ಶಿವಮೊಗ್ಗ ಕರ್ನಾಟಕ ಸಂಘದ ಬಹುಮಾನ ದಕ್ಷಿಣ ಭಾರತ ಜೈನ ಮಹಾಸಭೆಯ ಸಾಹಿತ್ಯ ಪ್ರಶಸ್ತಿ (2014) ಕಾಂತಾವರ ಸಾಹಿತ್ಯ ಪ್ರಶಸ್ತಿ (2015) ಕನ್ನಡ ಸಾಹಿತ್ಯ ಪರಿಷತ್ತಿನ “ಚಾವುಂಡರಾಯ ಪ್ರಶಸ್ತಿ (2015) ಕರ್ನಾಟಕ ಸಾಹಿತ್ಯ ಅಕಾಡೆಮಿಯ “ಸಾಹಿತ್ಯಶ್ರೀ ಪ್ರಶಸ್ತಿ” (2017) ಭಾರತೀಯ ಅನುವಾದ ಪರಿಷತ್ತಿನ “ಅನುವಾದಶ್ರೀ” ಪ್ರಶಸ್ತಿ (2018) “ಜ್ವಾಲಾಮುಖಿ ಪರ್” ಹಿಂದಿ ಅನುವಾದಿತ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ (2019)